Posts

ಗಾದೆ ಸುಳ್ಳಾಗುವುದಿಲ್ಲವೇ....?

Image
ಗಾದೆಗಳು ಸುಳ್ಳಾಗುವುದಿಲ್ಲವೇ?.... ಬಹಳ ದಿನಗಳಿಂದ ಸಿಗದೇ ಇದ್ದ ಹೂವಿನ ಗಿಡದ ಬೀಜ ಇತ್ತೀಚೆಗೆ ಸಿಕ್ಕಿತು ಎಂದು ಹರ್ಷದಿಂದ ಮನೆಯ ಹೊರಗೆ ಇದ್ದ ಪಾಟ್ ನಲ್ಲಿ ನೆಟ್ಟು ,ದಿನವೂ ನೀರುಣಿಸಿ ನೋಡತೊಡಗಿದೆ.ಮೊಳಕೆಯೊಡೆಯಿತು,ಎಲೆ ಮೂಡಿ ಸಸಿಯಾಯಿತು.ಗಿಡ ದೊಡ್ಡದಾಯಿತು, ಹೂವು ಬಿಡಲೇಇಲ್ಲ.ಅದರ ಮೇಲೆ ಬಿಳಿ ಶಿಲೀಂದ್ರಗಳು ಬಂದು ಗಿಡ ಒಣಗಿ ಸತ್ತೇ ಹೋಯಿತು. ಬೇಸರವಾಯಿತು. ಪಾಪ,ಅದೂ ಒಂದು ಜೀವಿ,ಕಾಯಿಲೆ ಬಂದಾಗ ಎಷ್ಟು ಸಂಕಟ ಅನುಭವಿಸಿತೋ ಏನೋ .ಗಿಡ-ಮರಗಳಿಗೆ ಕಾಯಿಲೆ ಬಂದಾಗ,ಸಂಕಟವಾದಾಗ ಅವು ಯಾರಲ್ಲಿ ಹೇಳಿಕೊಳ್ಳಬೇಕು?-ಹೀಗೆ ಆಲೋಚಿಸುತ್ತಿದ್ದಾಗ ಎರಡು ಗಾದೆಗಳು ನೆನಪಾದವು.'ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ'.   ' ಕಷ್ಟ  ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತದೆಯೇ'   ಈ ಎರಡೂ ಗಾದೆಗಳ ಆಳಕ್ಕೆ ಹೋಗಬೇಕೆನಿಸಿತು.ಮೊದಲಿಗೆ ,ವೇದ ಸುಳ್ಳಾದರೂ ....ಎಂಬ ಮಾತನ್ನೇ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ವೇದಗಳು ಅಪೌರುಷೇಯ.ದ್ರಷ್ಟಾರರಾದ ನಮ್ಮ ಋಷಿವರೇಣ್ಯರು ಅದನ್ನು ಗ್ರಹಿಸಿ ,ತಮ್ಮ ಶಿಷ್ಯರಿಗೆ ಬಾಯಿ ಪಾಠ ಮಾಡಿಸಿದರು.ಬಾಯಿಪಾಠ ಪದ್ಧತಿಯಲ್ಲಿ ಯೇ ಅದು ಸಾವಿರಾರು ವರ್ಷಗಳಿಂದ ಉಳಿದುಕೊಂಡು ಬಂದಿದೆ.ಮನುಕುಲದ ಒಳಿತಿಗಾಗಿ ವೇದಮಂತ್ರಗಳಲ್ಲಿ ಹಿತವಚನವಿದೆ.ಉದಾಹರಣೆಗೆ 'ವ್ರತವನ್ನು ಮಾಡು'  ಎಂದು ವೇದವು ಹೇಳುತ್ತಿದೆ. ಇಲ್ಲಿ ವ್ರತ ಎಂದರೆ  ತಂದೆ-ತಾಯಿ ಬದುಕಿಗೆ ಅಳವಡಿಸಿಕೊಂಡಿದ್ದ ಆದರ್ಶಗಳು. ...

ನಾನು..........

Image
ನನಗೆ ತಿಳಿಯದ ನಾನು ನಾವು ಕಾಣುತ್ತಿರುವ ಈ ಜಗತ್ತು  ಎರಡು ಬಗೆಯದಾಗಿದೆ.ಅದರಲ್ಲಿ ಒಂದು ವಸ್ತುನಿಷ್ಠ ಜಗತ್ತು, ಇನ್ನೊಂದು ಪಾರಮಾರ್ಥಿಕ ಜಗತ್ತು. ವಸ್ತುನಿಷ್ಠ ಜಗತ್ತು ಅಸೀಮ ಆಸೆ-ಆಕಾಂಕ್ಷೆಗಳಿಂದ ತುಂಬಿ ಹೋಗಿದೆ. ಇದು ಕ್ಷಣ-ಕ್ಷಣಕ್ಕೂ ಬದಲಾಗುವ ಸ್ವಭಾವಹೊಂದಿದೆ. ಆದರೆ ಪಾರಮಾರ್ಥಿಕ ಜಗತ್ತು ಅಚಲವಾಗಿದೆ. ಅಚಲವಾಗಿರುವುದರಿಂದಲೇ ಅದು ಪರಮಾರ್ಥವಾಗಿದೆ. ವಸ್ತುನಿಷ್ಠ ಜಗತ್ತಿನಲ್ಲಿ ನಾನು ಎಂಬುದೇ ಪ್ರಧಾನವಾಗಿದೆ. ಪಾರಮಾರ್ಥಿಕ ಜಗತ್ತಿನಲ್ಲಿ ಶ್ರೀ ಭಗವಂತನ ಹೊರತಾಗಿ ಬೇರೇನೂ ಇಲ್ಲ.ಎಲ್ಲ ತಾತ್ವಿಕ ಕಲ್ಪನೆಗಳೂ ಭಗವಂತನನ್ನೇ ಪರಿಭ್ರಮಣ ಮಾಡುತ್ತವೆ. ಈಗ ನೀವು ಹೇಳಿ, ನಾನು  ಯಾರು........  ? 'ನಾನು ಇಂತಹ ಹೆಸರಿನವನು.....' ನೀವು ನಿಮ್ಮ ಹೆಸರನ್ನು ಹೇಳುತ್ತಿದ್ದೀರಿ, ನಾನು ಎಂಬುದು ಪ್ರತ್ಯೇಕವಾಗಿಯೇ ಉಳಿಯಿತು..... 'ನಾನು ಇಂತಹವರ ಮಗ.....' ನೀವು ಆ ಹೆಸರಿನ ವ್ಯಕ್ತಿ ಯೊಂದಿಗಿನ ನಿಮ್ಮ ಸಂಬಂಧವನ್ನು ಹೇಳುತ್ತಿದ್ದೀರಿ,ನಾನು ಬೇರೆಯಾಗಿಯೇ ಉಳಿಯಿತು.... 'ನಾನು ಇಂತಹ ವೃತ್ತಿಯ ಇಂತಹ ಹೆಸರಿನವನು....' ನೀವು ನಿಮ್ಮ ಹೆಸರಿಗೆ ವೃತ್ತಿಯನ್ನು ಅಂಟಿಸುತ್ತಿದ್ದೀರಿ,ಅದು ನಾನಾರು ಎಂಬುದಕ್ಕೆ ಉತ್ತರ ವಲ್ಲ.... ಹಾಗಾದರೆ, ನಿಜಕ್ಕೂ ನಾನು ಯಾರು...ಅದನ್ನಾದರೂ ಹೇಳಿ... ನೀವು ಎಲ್ಲಿಗೆ  ಬರಬೇಕಿತ್ತೋ ಅಲ್ಲಿಗೆ ಈಗ ಬಂದಿರಿ...ಆತ್ಮವೇ ನಿಮ್ಮ ನಿಜ ಸ್ವರೂಪ.... ಅದು ದೇಹದಲ್ಲಿ ಅಂತರ್ಗತವಾಗ...